Tuesday, March 17, 2009

Chitradurga Jilla Darshana - A Unique DVD by Chinmuladri Creations

ಸಂಗ್ರಹಯೋಗ್ಯ ಡಿ.ವಿ.ಡಿ.
ಚಿನ್ಮೂಲಾದ್ರಿ ಕ್ರಿಯೇಶನ್ಸ್ ಹೊರತಂದಿರುವ
ಚಿತ್ರದುರ್ಗ ಜಿಲ್ಲಾ ದರ್ಶನ

ಚಿತ್ರದುರ್ಗದೊಳು ಕಲ್ಲು ಕಲ್ಲುಗಳು
ಕೂಗಿ ಕರೆಯುತಿಹವು,
ಮೆರೆದ ನಾಯಕರ ಏಳು ಬೀಳುಗಳ
ಕಥೆಯ ಹೇಳುತಿಹವು.
ಕಲ್ಲಿಗೊಂದು ಕಥೆ,
ಕಲ್ಲಿಗೊಂದು ವ್ಯಥೆಕಥನಕಾರರೇಕೆ ?
..........................................

ಎಂದು ಬಯಲು ಬಂಡೆ ವಸ್ತುಸಂಗ್ರಹಾಲಯವಾದ ಚಿತ್ರದುರ್ಗದ ಚಿತ್ರವನ್ನು ಮಥಿಸಿ ಬರೆದುಕೊಟ್ಟ ಸುಬ್ರಹ್ಮಣ್ಯ ಭಟ್ಟರ ಕವಿವಾಣಿ ಕೇಳಿದವರು, ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳನ್ನು ಓದಿದವರು, ನಾಗರಹಾವು, ಹಂಸಗೀತೆ ಮತ್ತು ಕಲ್ಲರಳಿ ಹೂವಾಗಿ ಚಲನಚಿತ್ರಗಳನ್ನು ನೋಡಿದವರು, ದುರ್ಗದ ಕೋಟೆಯನ್ನು ಮಾತ್ರ ನೋಡಿದಂತಾಗಿದೆ.
ಚಿತ್ರದುರ್ಗದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂಬ ಆಸೆ, ಕುತೂಹಲ ಇರುವವರಿಗಾಗಿ ಚಿತ್ರದುರ್ಗದ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರು ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಹೊರತಂದಿದ್ದು ಕೇವಲ 99 ರೂಪಾಯಿಗಳಲ್ಲಿ ಜಿಲ್ಲೆಯ ಸೊಗಡನ್ನು ವರ್ಣರಂಜಿತವಾಗಿ ಕಟ್ಟಿಕೊಟ್ಟಿದ್ದಾರೆ.
ಸುದ್ದಿಗಿಡುಗ ಪತ್ರಿಕೆಯ ಸಂಪಾದಕ ಶ. ಮಂಜುನಾಥ್ ಅವರ ಸಲಹೆ, ಪಿ.ವಿ. ರಮೇಶ್ ರೆಡ್ಡಿ, ಪಿ.ವಿ. ವಾಸುದೇವ ರೆಡ್ಡಿ ಮತ್ತು ಮಕ್ಕಳ ಸಹಕಾರ, ಯುವ ಉತ್ಸಾಹಿಗಳಾದ ಕೆ.ಜಿ. ವೀರೇಂದ್ರಕುಮಾರ್ ಮತ್ತು ಎಸ್. ಸಾನಿಕಂ ಮಂಜುನಾಥ ರೆಡ್ಡಿ ಅವರ ನಿದರ್ೇಶನ, ಪಿ.ಆರ್. ಚಂದ್ರಕಾಂತ್ ಛಾಯಾಗ್ರಹಣ, ಸಿ. ನಾಗರತ್ನ, ಆರ್. ಗುರುಮೂತರ್ಿ, ಕೋಲಂನಳ್ಳಿ ಪೀತಾಂಬರ್ ಮತ್ತು ಜಯಪ್ರಕಾಶ್ ನಾಗತಿಹಳ್ಳಿ ಅವರ ಮಧುರ ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿಬಂದಿರುವ ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಸರಿಯಾಗಿ ಹೊರಬಂದಿರುವುದು ಅಪರೂಪದ ಸಾಧನೆಯೇ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರೆಲ್ಲರೂ ಒಂದೊಂದು ಡಿವಿಡಿ ತೆಗೆದುಕೊಂಡು ಹೋಗಲು ಅನುವಾಗುವಂತೆ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಏಪರ್ಾಡು ಮಾಡಿರುವುದು ಅಭಿನಂದನಾರ್ಹ ಕೆಲಸ.
ಸುಮಾರು ಎರಡೂವರೆ ಗಂಟೆಗೂ ಹೆಚ್ಚುಕಾಲ, ಒಂದು ಚಲನಚಿತ್ರ ನೋಡುವಂತೆ, ಕೂತು ನೋಡಬಹುದಾದ ಈ ಡಿವಿಡಿಯಲ್ಲಿ ಮೂಡಿಬಂದಿರುವ ದೃಶ್ಯಾವಳಿಗೆ ಏಳು ಜನ ಲೇಖಕರು ನಿರೂಪಣಾ ಸಾಹಿತ್ಯ ಒದಗಿಸಿದ್ದಾರೆ. {ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ - ಚಿತ್ರದುರ್ಗ (50 ನಿಮಿಷ), ಕೋಲಂನಳ್ಳಿ ಪೀತಾಂಬರ್ - ಚಳ್ಳಕೆರೆ (17 ನಿಮಿಷ), ಬೆಲಗೂರು ಶ್ರೀಕಾಂತ್ ಮತ್ತು ಪೀಲಾಪುರ ಕಂಠೇಶ್ - ಹೊಸದುರ್ಗ (28 ನಿಮಿಷ), ಕೆ.ಜಿ. ವೆಂಕಟೇಶ್ - ಮೊಳಕಾಲ್ಮುರು (17 ನಿಮಿಷ), ಚಂದ್ರಶೇಖರ ತಾಳ್ಯ - ಹೊಳಲ್ಕೆರೆ (24 ನಿಮಿಷ) ಹಾಗೂ ಯಳನಾಡು ಅಂಜನಪ್ಪ - ಹಿರಿಯೂರು (12 ನಿಮಿಷ).} ಲಭ್ಯವಿರುವ ಜಿಲ್ಲಾ ಹಾಗೂ ತಾಲ್ಲೂಕು ದರ್ಶನಗಳು, ಲೇಖನಗಳು, ಜನಜನಿತ ನಂಬಿಕೆಗಳು, ಹೇಳಿಕೆಗಳು, ಐತಿಹ್ಯಗಳು ಮತ್ತು ದಾಖಲೆಗಳಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ಈ ಲೇಖಕರು ನಿರೂಪಣಾ ಸಾಹಿತ್ಯ ರಚಿಸಿರುವುದರಿಂದ ಅಲ್ಲಲ್ಲಿ ಚಚರ್ಾಸ್ಪದ ಅಂಶಗಳು ಉಳಿದಿವೆ. ಪ್ರಾಜ್ಞರು ಇವರ ಬಗ್ಗೆ ಹರಿಹಾಯದೆ ಇತಿಹಾಸಕಾರರಿಂದ ಪರಾಮಶರ್ಿತ ಮಾಹಿತಿ ಒದಗಿಸಿಕೊಟ್ಟಲ್ಲಿ,ಉತ್ತಮಗೊಳಿಸುವ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಕೂಡಲೇ ಅಳವಡಿಸಿಕೊಳ್ಳುವ ವಿಶಾಲ ಮನೋಭಾವ ಡಿವಿಡಿ ಸಿದ್ಧಪಡಿಸಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಖಂಡಿತಾ ಇದೆ ಎಂದು ಹೇಳಬಹುದು.
ತಾಲ್ಲೂಕುವಾರು ಮಾಹಿತಿಯನ್ನು ಆಯಾಯ ತಾಲ್ಲೂಕಿನವರಿಂದ ಕ್ರೋಢೀಕರಿಸಿ, ಅಪರೂಪದ ಸ್ಥಳಗಳ ದೃಶ್ಯಗಳನ್ನು ಸೆರೆಹಿಡಿದು, ಸುಮಾರು ಮೂರು ವರ್ಷಗಳಿಗೂ ಹೆಚ್ಚುಕಾಲ ಶ್ರಮವಹಿಸಿದ ವೀರೇಂದ್ರ ಕುಮಾರ್ ಮತ್ತು ಗೆಳೆಯರ ತಂಡ ಚಿತ್ರದುರ್ಗದ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಕಳೆ ಕಟ್ಟುವಂತಹ ಅಪರೂಪದ ಕೆಲಸ ಮಾಡಿ, ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಚಿತ್ರದುರ್ಗ ಯಾವಾಗಲೂ ಒಂದು ಹೆಜ್ಜೆ ಮುಂದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ನೀವೂ ಒಂದು ಡಿ.ವಿ.ಡಿ. ಕೊಳ್ಳಿ. ನೋಡಿ. ಖುಷಿಯಾದರೆ ಚಿತ್ರದುರ್ಗದ ಚಚರ್್ ಬಡಾವಣೆಯಲ್ಲಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಒಂದು ಥ್ಯಾಂಕ್ಸ್ ಹೇಳಿ.
ಫೋನ್ : 9986142889 / 9844311515
ಪರಿಚಯಿಸಿದವರು: ಬೇದ್ರೆ ಮಂಜುನಾಥ

Tuesday, March 3, 2009

India is a Great Country - The Success Story - YouTube Videos

India is a Great Country
The Success Story

http://www.youtube.com/watch?v=PAl6WdFuwDo



http://www.youtube.com/watch?v=ulocM00FzEw



INDIA HISTORY : PART I

http://www.youtube.com/watch?v=uU3eqP-nxu8



INDIA HISTORY : PART II

http://www.youtube.com/watch?v=l-W3UM7hpBU



INDIA HISTORY : PART III

http://www.youtube.com/watch?v=XhnuIC17fGU



INDIAN FREEDOM MOVEMENT : BHAGAT SINGH PART 1

http://www.youtube.com/watch?v=ZVK17ThcBa8



INDIAN FREEDOM MOVEMENT : STORY OF BHAGHAT SINGH - PART 2

http://www.youtube.com/watch?v=5nb5OH8LULk


http://www.youtube.com/watch?v=tCjC05FR-ro


http://www.youtube.com/watch?v=NXpQ-N_4nQ8


http://www.youtube.com/watch?v=NlYHOMLuoR8
http://www.youtube.com/watch?v=Ga8p_mbgRg8

Saturday, January 17, 2009

75th Kannada Sahithya Sammelana - Invitation to all Kannada Lovers


ಸರ್ವರಿಗೂ ಸುಸ್ವಾಗತ
ಸಂಪೂರ್ಣ ಆಹ್ವಾನ ಪತ್ರಿಕೆ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

Thursday, January 8, 2009

Seminar on Indus Valley Civilization held at Sirigere on 03-01-2009 Resource Person Dr. B. P. Kumar, HOD of History, AVK College, Davanagere

http://in.youtube.com/watch?v=SdGbamPgf8o


http://in.youtube.com/watch?v=BqLOXIIV45I



http://in.youtube.com/watch?v=krJ4J5RWPCE


http://in.youtube.com/watch?v=_J1Nd9BeLVw
















Seminar on Indus Valley Civilization held at Sirigere on 03-01-2009 Resource Person Dr. B. P. Kumar, HOD of History, AVK College, Davanagere

Monday, January 5, 2009

Weclcome to Chitradurga District P.U. College History Lecturers' Forum



2009 ರ ಜನವರಿ 03 ರಂದು ಚಿತ್ರದುರ್ಗ ತಾಲ್ಲೂಕು ಸಿರಿಗೆರೆಯಲ್ಲಿ
ಉದ್ಘಾಟನೆಗೊಂಡಿರುವ
ಚಿತ್ರದುರ್ಗ ಪದವಿ ಪೂರ್ವ ಕಾಲೇಜುಗಳ ಇತಿಹಾಸ ವೇದಿಕೆಗೆ
ಸುಸ್ವಾಗತ